Delivery Jobs

Delivery Jobs Contact information, map and directions, contact form, opening hours, services, ratings, photos, videos and announcements from Delivery Jobs, Recruiter, Bangalore.

Permanently closed.
12/11/2023

🙏🌷🙏 *ಶುಭೋದಯ* 🙏🌷🙏

ಈ ಗ್ರೂಪಿನ ಸಮಸ್ತ ಸದಸ್ಯರಿಗೂ,ಅವರ ಬಂಧು ಮಿತ್ರರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಈಗತಾನೆ ನವರಾತ್ರಿ ಆಚರಿಸಿದ್ದೇವೆ. ಈಗ ಪುನಃ ಸರಣಿ ಹಬ್ಬಗಳು. ಇದೇ ಹಿಂದೂ ಧರ್ಮದ ವೈಶಿಷ್ಟ್ಯ. ಪ್ರತಿ ಹಬ್ಬದ ಹಿಂದೆಯೂ ಒಂದು ಐತಿಹ್ಯವಿರುತ್ತದೆ. ಹಬ್ಬವೆಂದರೆ ಸುಮ್ಮನೆ ಹಬ್ಬದೂಟ ಮಾಡಿ ಮಲಗುವುದು ಮಾತ್ರವಲ್ಲ. ಪ್ರತೀ ಹಬ್ಬದಲ್ಲೂ ನಮ್ಮ ದೇವರನ್ನು, ತಂದೆತಾಯಂದಿರನ್ನು, ಗುರು ಹಿರಿಯರನ್ನು, ವಂದಿಸಿ ಆಶೀರ್ವಾದ ಪಡೆಯಬೇಕು. ಇಷ್ಟೇ ಅಲ್ಲದೆ ಕಾಲವಾದ ನಮ್ಮ ಪೂರ್ವಜರಿಗೂ ಕೂಡಾ ನಮಿಸಿ ಗೌರವಿಸಬೇಕು. ಮನೆ ಮಂದಿಯೆಲ್ಲ ಹೊಸ ಬಟ್ಟೆ ಧರಿಸಿ ಒಬ್ಬರಿಗೊಬ್ಬರು ಮನೆ ಸದಸ್ಯರೆಲ್ಲ ಅಭಿವಂದಿಸಿ ಹಾಗೆಯೇ ನೆರೆಹೊರೆಯವರರೊಂದಿಗೆ ಸಂಭ್ರಮಿಸುವುದು ಕೂಡ ನಮ್ಮ ಹಬ್ಬಗಳ ಒಂದು ವಿಶೇಷ. ಸದಾ ನಮ್ಮ ಮೇಲೆ ದೇವರ, ಗುರು ಹಿರಿಯರ ಕೃಪಾಶೀರ್ವಾದಗಳಿರಬೇಕು. ಹಾಗಿದ್ದಾಗ ಮಾತ್ರ ‌ಸ್ವಸ್ಥ, ಶಾಂತ ಸಮಾಜ ಇರಲು ಸಾಧ್ಯ.

ಈಗ ನರಕ ಚತುರ್ದಶಿ (ನರಕಾಸುರ ವಧೆ,ಅಭ್ಯಂಜನ), ಅಮಾವಾಸ್ಯೆ, ದೀಪಾವಳಿ, ಅಂಗಡಿ ಪೂಜೆ , ಬಲಿಪಾಡ್ಯಮಿ, ಗೋಪೂಜೆ ,ತುಳಸಿ ಹಬ್ಬ, ಉತ್ಥಾನ ದ್ವಾದಶಿ ಹೀಗೆ ಸರಣಿ ಹಬ್ಬಗಳು. ಈ ಹಬ್ಬಗಳ ಹಿಂದೆಯೂ ದುಷ್ಟ ಶಿಕ್ಷಣೆ , ಶಿಷ್ಟ ರಕ್ಷಣೆಯ ಐತಿಹ್ಯವೇ ಅಡಗಿದೆ. ಈ ಹಬ್ಬದಲ್ಲಿ ನಾವು ದುಷ್ಟ ಶಕ್ತಿಗಳ ನಾಶಕದ ಸೂಚಕವಾಗಿ ಸಿಡಿಮದ್ದು , ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತೇವೆ, ಸಿಹಿ ಹಂಚುತ್ತೇವೆ . ಇದು ಹಿಂದಿನಿಂದಲೂ ನಡೆದು ಬಂದ ಆಚರಣೆಗಳು. ಇದು ಹೀಗೆಯೇ ಮುಂದುವರಿಯಬೇಕು.
ಅನಾಚಾರಗಳು ಹೆಚ್ಚಿದಾಗಲೆಲ್ಲಾ ಈ ಲೋಕವನ್ನುಳಿಸಲು ಲೋಕೋದ್ಧಾರಕ ಭಗವಂತನ ಅವತಾರವಾಗಿದೆ . ಇನ್ನು ಮುಂದೆಯೂ ಇದು ಮುಂದುವರಿಯುತ್ತದೆ.

ಈಗಲೂ ಮತ್ತೆ ಮತ್ತೆ ಲೋಕದಲ್ಲೆಲ್ಲಾ ಹಿಂಸೆ, ಅನಾಚಾರ ಹೆಚ್ಚುತ್ತಿದೆ. ಇದನ್ನು ಎಲ್ಲಾ ಬುದ್ಧಿ ಇರುವ ನಾಗರಿಕರು ಖಂಡಿಸಲೇಬೇಕು. ನಮ್ಮ ರಾಜ್ಯದಲ್ಲಿ ಅಥವಾ ನೆರೆರಾಜ್ಯಗಳಲ್ಲಿ ಇಂತಹ ಉಗ್ರವಾದತ್ವವನ್ನು ಬೆಂಬಲಿಸಿ ಸಭೆ ಸಮಾರಂಭಗಳನ್ನು ನಡೆಸುತ್ತಿರುವುದು ವಿಷಾದನೀಯ.
*“ವಸುಧೈವ ಕುಟುಂಬಕಮ್”* ಎಂದು ಸಾರಿದ ನಾವು ಈಗ ಹತಾಶರಾಗಿದ್ದೇವೆ. ಇಡೀ ಭೂಮಂಡಲದ ರಾಷ್ಟ್ರಗಳು ಇಗ್ಭಾಗವಾಗಿ ಒಬ್ಬರಮೇಲೊಬ್ಬರು ಕತ್ತಿಮಸೆಯುವ ಸನ್ನಿವೇಶ ಎದುರಾಗಿದೆ. ನಮ್ಮ ಭಾರತ ಮಾತ್ರವೇ ತಟಸ್ಥ ರೀತಿ ಅನುಸರಿಸುತ್ತಾ, ಉಗ್ರವಾದವನ್ನು ಖಂಡಿಸುತ್ತಾ ಶಾಂತಿ ಸ್ಥಾಪನೆಗಾಗಿ ಕೈಲಾದ ಪ್ರಯತ್ನವನ್ನು ಮಾಡುತ್ತಿದೆ. ಈಗ ಭುವಿಯಲ್ಲಿ ಉಳಿದಿರುವುದು ಎರಡೇ ಮಾರ್ಗ. ಶಾಂತಿ ಸ್ಥಾಪನೆ ಅಥವಾ ಮೂರನೇ ವಿಶ್ವ ಮಹಾಯುದ್ಧ. ಯುದ್ಧ ನಡೆದಲ್ಲಿ ಯಾರಿಗೂ ಉಳಿಗಾಲವಿಲ್ಲ. ಯುದ್ಧ ನಡೆದಲ್ಲಿ ಇಡೀ ವಿಶ್ವ ನಾಗರಿಕತೆಯೇ ಮೂವತ್ತು ನಲವತ್ತು ವರ್ಷಗಳಷ್ಟು ಹಿಂದೆ ಹೋಗಬಹುದು.

ಇತರ ದೇಶದಲ್ಲಿ ನಡೆದ ಬಂಡುಕೋರರ ಅಟ್ಟಹಾಸ ಇಲ್ಲಿ ನಡೆಯುವುದಿಲ್ಲ ಎನ್ನಲು ಸಾಧ್ಯವೇ ಇಲ್ಲ. ಇಡೀ ಪ್ರಪಂಚವೇ ಈಗ ಅಸುರಕ್ಷಿತ. ಎಲ್ಲೆಲ್ಲೂ ಭೂಗತ ಉಗ್ರರಿದ್ದಾರೆ . ಇವರ ಸಂಪೂರ್ಣ ನಿರ್ನಾಮ ವಿಷ್ಣುವಿನ ಹನ್ನೊಂದನೇ ಅವತಾರದಲ್ಲಿ ಮಾತ್ರ ಸಾಧ್ಯ. ಅದಕ್ಕಾಗಿ ಕಾಯಲು ಸಾಧ್ಯವಿಲ್ಲ . ಇದಕ್ಕಾಗಿ ನಾವು ನಮ್ಮ ಹಿಂದೂ ಜನಾಂಗದ ರಕ್ಷಣೆಗಾಗಿ ನಮ್ಮ ಸಮಾಜದ ಸುತ್ತ ಭದ್ರಕೋಟೆ ನಿರ್ಮಿಸಿಕೊಳ್ಳಬೇಕು.

ಇದಕ್ಕೆಲ್ಲಾ ಒಂದೇ ಪರಿಹಾರವೆಂದರೆ ಎಲ್ಲಾ ಧರ್ಮಗಳನ್ನೂ ಸಮಾನವಾಗಿ ಗೌರವಿಸುವ , ನ್ಯಾಯಯುತವಾಗಿ ಆಡಳಿತ ನಡೆಸುವ, ಸುಭದ್ರ ಸರ್ಕಾರವನ್ನು ಸ್ಥಾಪಿಸುವುದು. ನಮ್ಮ ಮುಂದೆ ಸಧ್ಯದಲ್ಲೇ ರಾಷ್ಟ್ರ ಸಾರ್ವತ್ರಿಕ ಚುನಾವಣೆಗಳು ಬರಲಿವೆ. ನಾವೆಲ್ಲರೂ ನಮ್ಮ ವಿವೇಕವನ್ನು ಬಳಸಿ ಉತ್ತಮ ರಾಜಕೀಯ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಹಾಗೂ ಅಖಂಡ ಹಿಂದೂ ಸುಖೀ ರಾಷ್ಟ್ರದ ನಿರ್ಮಾಣವಾಗಬೇಕು, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲೇಬೇಕು. ಈಗಾಗಲೇ ಇಡೀ ದೇಶದ ಮಹತ್ವಾಕಾಂಕ್ಷೆಯ ರಾಮಮಂದಿರದ ನಿರ್ಮಾಣವಾಗುತ್ತಿದೆ. ಇದರ ಮುಂದುವರಿದ ಭಾಗವೇ ರಾಮರಾಜ್ಯದ ಪುನರ್ ನಿರ್ಮಾಣ. ನಾವೆಲ್ಲರೂ ಒಗ್ಗೂಡಿ ಮನಸ್ಸು ಮಾಡಿದಲ್ಲಿ ಇದು ಖಂಡಿತಾ ಅಸಾಧ್ಯವಾದುದಲ್ಲ.

ಇದು ದೀಪಗಳ ಹಬ್ಬ. ದೀಪ ಎಂಬುದು ಬೆಳಕು. ಸಮಸ್ತ ಲೋಕದ ಜನರಿಗೆ ಈ ಬೆಳಕು ಅಥವಾ ದೀಪ ಸನ್ಮಾರ್ಗದಲ್ಲಿ ನಡೆಯಲು ದಾರಿ ದೀವಿಗೆಯಾಗಲಿ.
ಆ ಭಗವಂತನು ತಮ್ಮೆಲ್ಲರಿಗೂ , ತಮ್ಮ ಬಂಧುಬಳಗ ಮತ್ತು ಸ್ನೇಹಿತರಿಗಳಿಗೂ ಕೂಡಾ ಆಯುರಾರೋಗ್ಯ ಐಶ್ವರ್ಯ ಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಹಾಗೂ ವಿಶೇಷವಾಗಿ ನಾವೆಲ್ಲರೂ ವಿಶ್ವಶಾಂತಿಗಾಗಿ ಪ್ರಾರ್ಥಿಸೋಣ. ಕಲಿಯುಗದಲ್ಲಿ “ *ಸಾಮೂಹಿಕ ಪ್ರಾರ್ಥನೆಗೆ”* ವಿಶೇಷ ಶಕ್ತಿಯಿದೆ. ತಾವೆಲ್ಲರೂ ತಮ್ಮ ಕುಟುಂಬ ವರ್ಗದೊಂದಿಗೆ ಪ್ರತಿದಿನ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದಲ್ಲಿ ತಮ್ಮ ಕುಟುಂಬಕ್ಕೂ, ಭೂಲೋಕಕ್ಕೂ ಒಳ್ಳೆಯದಾಗುವುದರಲ್ಲಿ ಯಾವುದೇ ಸಂಶಯವಿಲ್ಲ .

ವಿಶೇಷವಾಗಿ ಮಹಾತಾಯಿ ಲಕ್ಷ್ಮೀದೇವಿಯು ನಮ್ಮೆಲ್ಲರ ಮನೆಗಳಿಗೂ ಬಂದು ಹರಸಿ ಶಾಶ್ವತವಾಗಿ ನೆಲೆನಿಲ್ಲುವಂತಾಗಲಿ.

*।। ಯಾ ದೇವಿ* *ಸರ್ವಭೂತೇಷು* *ಮಾತೃರೂಪೇಣ* *ಸಂಸ್ಥಿತಾ ನಮಸ್ತಸ್ಯೈ* *ನಮಸ್ತಸ್ಯೈ ನಮಸ್ತಸ್ಯೈ* *ನಮೋನಮಃ ।।*

*।। ಲೋಕಾಃ ಸಮಸ್ತಾಃ* *ಸುಖಿನೋ* *ಭವಂತು।* *ಸಮಸ್ತ* *ಸನ್ಮಂಗಲಾನಿ* *ಭವಂತು।।*

- ಇತಿ ಸದಾ ಸಜ್ಜನರ ವಿಧೇಯ

11/11/2023

****ಬ್ರಾಹ್ಮಣ್ಯ ಹಾದಿ ತಪ್ಪಿದ್ದು ಯಾವಾಗ****
೧. Anniversary , Birthday, New year ದಿನ ಮೊಟ್ಟೆ ಹಾಕಿದ ಕೇಕ್ ತಂದು ಕತ್ತರಿಸಿ ಸಂಭ್ರಮಿಸುವಾಗ ಹಿರಿಯರು ಮಕ್ಕಳಿಗೆ ಬುದ್ಧಿ ಹೇಳದಿದ್ದಾಗ.( ಕೆಲವರು ಎಗ್ಲೆಸ್ ಕೇಕ್ ತರುವುದುಂಟು .ಆದರೆ ಜಗತ್ತಿನ ಎಲ್ಲಾ ಬೇಕರಿಗಳಲ್ಲು 'ಲೆಸ್ ಎಗ್' ಇರುವ ಕೇಕ್ ಸಿಗಬಹುದೇ ಹೊರತು ಪ್ರಾಯಃ 'ಎಗ್ಲೆಸ್ ಕೇಕ್' ನಿಮಗೆ ಸಿಗುವುದಿಲ್ಲ ಎಂದು ಬೇಕರಿಯವರಿಂದಲೇ ಕೇಳಿ ತಿಳಿದಿದ್ದೇನೆ. ಕೊನೆಯ ಪಕ್ಷ ಮನೆಯಲ್ಲಿ ಮಾಡಿಕೊಂಡು ತಿನ್ನುವವರು ಧನ್ಯರು. ಏನೇ ಆದರೂ ಇದು ಪಾಶ್ಚಾತ್ಯರ ಅಂಧಾನುಕರಣೆ ಎಂದು ಬಿಟ್ಟವರು ಮಹನೀಯರು)

೨. ಮನೆಯಲ್ಲಿ ಜಾತಾಶೌಚ ,ಮೃತಾಶೌಚ ಮತ್ತು ರಜಸ್ವಲಾಶೌಚಗಳ ನಿಯಮ ತಿಳಿದು ನಡೆಯದೆ ಬಿಟ್ಟಾಗ.

೩. ಕಾನ್ವೆಂಟ್ಗೆ ಹೋಗುವ ಮಕ್ಕಳಿಗೆ ಯಾವುದು ತಿನ್ನಬೇಕು ಯಾವುದು ತಿನ್ನಬಾರದು ಎಂದು ಕಲಿಸದಿದ್ದಾಗ.

೪. ನಮ್ಮ ಬದುಕಿನ ಎತ್ತರ ನಿರ್ಧಾರವಾಗುವುದು ಥಳುಕಿನ ಉಡುಗೆ ತೊಡುಗೆಯಿಂದಲ್ಲ ,ಉತ್ತಮ ಸಂಸ್ಕಾರದಿಂದ ಎಂದು ಅರಿವು ಮೂಡಿಸಲು ಸೋತಾಗ.

೫. ಮಕ್ಕಳು ಓದದೇ ಬರೆಯದೇ ಇದ್ದಾಗ ಪೋಷಕರು ಬೈಯ್ಯುವಷ್ಟಾದರೂ ,ಸಂಧ್ಯಾವಂದನೆ ತುಳಸಿಪೂಜೆ ಬಿಟ್ಟಾಗಲೂ ಅದೇ ರೀತಿ ಬೈಯ್ಯುವುದನ್ನು ಮರೆತಾಗ.

೬. ಗಂಡು ಮಕ್ಕಳಿಗೆ ಸಕಾಲದಲ್ಲಿ ಉಪನಯನ ಸಂಸ್ಕಾರ ಮಾಡದೇ ಇದ್ದಾಗ. ಹೆಣ್ಣು ಮಕ್ಕಳನ್ನು ಧಾರ್ಮಿಕರಿಗೆ(ಆಚಾರವಂತರಿಗೆ) ಧಾರೆ ಎರೆಯಲು ಹಿಂಜರಿದಾಗ.

೭. ಯುವಕ ಯುವತಿಯರು ಸ್ವಧರ್ಮವನ್ನು ಧಿಕ್ಕರಿಸಿ ಅನ್ಯಾಜಾತಿಯವರೊಂದಿಗೆ ವಿವಾಹವನ್ನು ಮಾಡಿಕೊಂಡಾಗ.

೮. ಪರಂಪರಾಪ್ರಾಪ್ತವಾದ ವೈದಿಕ ಸಂಪ್ರದಾಯದ ಗುರುಗಳನ್ನು ಬಿಟ್ಟು ಕಂಡ ಕಂಡ ದೇವಮಾನವರಿಗೆ/ ತಥಾಕಥಿತ ಅವಧೂತರಿಗೆ ದಾಸರಾದಾಗ.

೯. ಮಡಿ ಮೈಲಿಗೆ ಆಚರಣೆ ಕೇವಲ ವರ್ಷದಲ್ಲಿ ಒಂದು ದಿನ ಮಾಡುವ ಶ್ರಾದ್ಧಕ್ಕೆ ಸೀಮಿತವಾದಾಗ.(ಕೆಲವರ ಮನೆಯಲ್ಲಿ ಅದೂ ಮಾಯವಾಗಿದೆ)

೧೦. ಅಪ್ಪ ಅಮ್ಮ ತಾವು ಅರ್ಥ ತಿಳಿಯದೆ ಮಾಡುವ ಮತ್ತು ಬೋಧಿಸುವ ಧಾರ್ಮಿಕ ಆಚರಣೆಗಳು ಮುಂದಿನ ಪೀಳಿಗೆಯವರಿಗೆ ಕಂದಾಚಾರವಾಗಿ ಕಂಡಾಗ.

೧೧. ಬ್ರಾಹ್ಮಣರು ತೊಡೆಯ ಮೇಲೆ ಹಾಸಿಗೆಯಮೇಲೆ ತಟ್ಟೆ ಇಟ್ಟುಕೊಂಡು ತಿನ್ನುವಷ್ಟು ಉದಾರವಾದಿಗಳಾದಾಗ.

೧೨. ಇಂದಿನ ಪೀಳಿಗೆಯ ಯುವಕರು ನಾಲಿಗೆ ಚಪಲಕ್ಕೆ ವೆಜ್ ನಾನ್ ವೆಜ್ ಬೇಧಭಾವ ಇಲ್ಲದೆ ರೆಸ್ಟೊರೆಂಟ್ಗಳಿಗೆ ಗೆಳೆಯ ಗೆಳತಿಯರೊಂದಿಗೆ ಹೋಗುವಾಗ.

೧೩.ಎಗ್ಗು ಸಿಗ್ಗಿಲ್ಲದೆ ಇನ್ನೊಬ್ಬರು ಎಂಜಲು ಮಾಡಿದ ಪದಾರ್ಥವನ್ನು ಸವಿಯುವಾಗ ಇಲ್ಲದ ಕೀಳರಿಮೆ - ಹಣೆಗೆ ಪುಂಡ್ರ ಧರಿಸುವಾಗ, ಪಂಚೆ ಉಡುವಾಗ ,ಶಿಖೆ ಬಿಡುವಾಗ ,ಜಡೆ ಹೆಣೆದುಕೊಳ್ಳುವಾಗ, ಸೀರೆ ಉಡುವಾಗ, ಹೂ ಮುಡಿಯುವಾಗ ಮನಸ್ಸಿನಲ್ಲಿ ಮೂಡುವಾಗ.

೧೪. ಸಹೋದ್ಯೋಗಿಗಳ ಜೊತೆ ಪಾರ್ಟಿ ಅಥವಾ ಔಟಿಂಗಿಗೆ ಹೋದಾಗ ಮಧ್ಯ, ಸಿಗರೇಟು, ಮಾಂಸಾಹಾರವನ್ನು ಚಪಲದಿಂದಲೋ ಅಥವಾ ಒತ್ತಡದಿಂದಲೋ ನಿರಾಕರಿಸಲು ಸೋತಾಗ.

೧೫. ಸಂಧ್ಯಾವಂದನೆಯಿಂದ ಮೊದಲ್ಗೊಂಡು ದೇವತಾರ್ಚನೆ, ಬ್ರಹ್ಮಯಜ್ಞ ,ವೈಶ್ವದೇವ, ಬಲಿಹರಣ, ಶ್ರಾದ್ಧ ,ಏಕಾದಶಿ, ಚಾತುರ್ಮಾಸ್ಯ ಮುಂತಾದ ನಿತ್ಯ ನೈಮಿತ್ತಿಕ ಕರ್ಮಗಳನ್ನು ಮರೆತಾಗ.

೧೬.ಮನೆಯೊಳಗೆ ನಾಯಿ ಬೆಕ್ಕುಗಳನ್ನು ಮುದ್ದಿಸಿ ಮಕ್ಕಳಂತೆ ಸಾಕುವಾಗ.

ಇದೆಲ್ಲಾ ಓದಿದರೆ ಕಲಿಯುಗದ ಬ್ರಾಹ್ಮಣರು ತಾವು ಬ್ರಾಹ್ಮಣ್ಯಕ್ಕೆ ಎಷ್ಟು ಹತ್ತಿರ ಅಥವಾ ದೂರ ಇದ್ದೇವೆ ಎಂದು ಮೌಲ್ಯಮಾಪನ ಮಾಡಿಕೊಳ್ಳಬಹುದು.
ಇಂದು ನಾವು ಬ್ರಾಹ್ಮಣ ಸಮಾಜದಲ್ಲಿ ಹಲವಾರು ಘಟನೆಗಳನ್ನು ಗಮನಿಸಬಹುದು.
ಉಪನಯನ ಆದ ಬ್ರಹ್ಮಚಾರಿಗೆ ಆಚಮಾನ ಮಾಡಲೂ ಬರುವುದಿಲ್ಲ. ಶ್ರಾದ್ಧಕ್ಕೋ, ಪೂಜೆಗೋ ಬಂದ ಬ್ರಾಹ್ಮಣರು ಮಠ ಮಂದಿರಗಳಲ್ಲಿ ಭೋಜನಕ್ಕೆ ಬಂದು ಕೂತಿರುತ್ತಾರೆ. ಕೆಲವು ಬ್ರಾಹ್ಮಣರಿಗಂತೂ ಪರಿಶೇಚನೆ ಮಾಡಿ ಚಿತ್ರಾಹುತಿ ಇಡಲು ಬಾರದೆ ಅತ್ತಿತ್ತ ಪಿಳಿ ಪಿಳಿ ನೋಡುವ ಗೊಂದಲತುಂಬಿದ ಹತ್ತಾರು ಕಣ್ಣುಗಳನ್ನು ನೋಡಿದಾಗ ಬೇಸರವಾಗುತ್ತದೆ.

*ಒಮ್ಮೊಮ್ಮೆ ಮಗನಿಗೆ ಬ್ರಹ್ಮೋಪದೇಶ ಮಾಡುವಾಗ ವಿಶ್ವಾಮಿತ್ರ ಗಾಯತ್ರಿ ಮಂತ್ರವನ್ನು ಮರೆತಿರುತ್ತಾನೆ.ಆಗ ಸಹಾಯಕ್ಕಾಗಿ ದೈನ್ಯದಿಂದ ಪುರೋಹಿತರ ಕಡೆ ತಿರುಗುವ ಅಪ್ಪನ ಆ ಕಣ್ಣುಗಳನ್ನು ನೋಡಿದರೆಬೇಸರವಾಗುತ್ತದೆ.*

*ತಂದೆ ತಾಯಿಯರೋ ಅಜ್ಜ ಅಜ್ಜಿಯರೋ ಮಕ್ಕಳಿಗೆ ಎಂಜಲು ಕೈಯಲ್ಲಿ ಮುಸುರೆಕೈಯಲ್ಲಿ ಅದು ಇದು ಮುಟ್ಟಬೇಡ , ತೊಡೆಯ ಮೇಲೆ ತಟ್ಟೆ ಇಟ್ಟುಕೊಂಡು ತಿನ್ನಬೇಡ ಎಂದಾಗ ಕೋಪದಿಂದ ದುರುಗುಟ್ಟಿ ನೋಡುವ ಆ ಕೋಪ ತುಂಬಿದ ಕಣ್ಣುಗಳನ್ನು ನೋಡಿದಾಗ ಬೇಸರವಾಗುತ್ತದೆ.*

*ನಿತ್ಯದಲ್ಲೇ ನಿಷಿದ್ಧವಾದ ಈರುಳ್ಳಿ ಬೆಳ್ಳುಳ್ಳಿ ಇತ್ಯಾದಿ ಪದಾರ್ಥಗಳನ್ನು ಶ್ರಾದ್ಧ ,ಹಬ್ಬ,ಹರಿದಿನಗಳಂದೂ ಬಿಡದೆ ಗಡದ್ದಾಗಿ ಹೊಡೆದು ತೃಪ್ತಿಯಿಂದ ಮುಚ್ಚುವ ಆ ಕಣ್ಣುಗಳನ್ನು ನೋಡಿದರೆ ಬೇಸರವಾಗುತ್ತದೆ.*

ಯಾಕೆ ಬೇಸರವಾಗಬೇಕು ಎಂದರೆ ಒಮ್ಮೆ ನಮ್ಮ ಪೂರ್ವಿಕರನ್ನು ಮತ್ತು ಅವರ ಹಿರಿಮೆಯನ್ನು ನೆನೆಯಬೇಕಾಗುತ್ತದೆ. ನಾವು ಅವರ ವಾರಸುದಾರರಲ್ಲವೆ?

*ಎಂತಹಾ ಪರಂಪರೆ ನಮ್ಮದು?*

ಸಮಸ್ತ ಭೂಮಂಡಲವನ್ನು ಗೆದ್ದು, ಆ ಭೂಮಿಯನ್ನೇ ದಾನ ಮಾಡಿ,ಕಡಲನ್ನೇ ಸರಿಸಿ ಕ್ಷೇತ್ರವಾಗಿಸಿದ ಪರಶುರಾಮ ದೇವರ ಪರಂಪರೆ ನಮ್ಮದು.

'ಧಿಕ್ ಬಲಂ ಕ್ಷತ್ರಿಯಬಲಂ ಬ್ರಹ್ಮತೇಜೋ ಬಲಂ ಬಲಮ್' ಎಂದು ಘೋರ ತಪಸ್ಸು ಮಾಡಿ ಗಾಯತ್ರಿ ಮಂತ್ರ ದ್ರಷ್ಟಾರರಾಗಿ,ಸೃಷ್ಟಿಗೆ ಪ್ರತಿಸೃಷ್ಟಿಯನ್ನೇ ಮಾಡಿ, ವಸಿಷ್ಠರಿಂದಲೇ *ಬ್ರಹ್ಮರ್ಷಿ* ಎಂದು ಕರೆಸಿಕೊಂಡ ವಿಶ್ವಾಮಿತ್ರರ ಪರಂಪರೆ ನಮ್ಮದು.

ದೈತ್ಯರ ನಿಗ್ರಹಕ್ಕೆ ತಮ್ಮ ತಪಸ್ಯದ ಶಕ್ತಿಯಿಂದ ಸಮುದ್ರವನ್ನೇ ಆಪೋಶನ ತೆಗೆದುಕೊಂಡ ಅಗಸ್ತ್ಯ ಮಹರ್ಷಿಗಳ ಪರಂಪರೆ ನಮ್ಮದು.

ತ್ರಿಮೂರ್ತಿಗಳನ್ನೇ ಮಕ್ಕಳಾಗಿ ಪಡೆದ ಅತ್ರಿ ಅನಸೂಯೆಯರ ಪರಂಪರೆ ನಮ್ಮದು.

ನವನಂದರನ್ನು ನಿಗ್ರಹಿಸಿ ಭಾರತವನ್ನು ಏಕಛತ್ರದಡಿಗೆ ತಂದು ಧರ್ಮ ನಿಲಿಸಿದ ಚಾಣಕ್ಯನ ಪರಂಪರೆ ನಮ್ಮದು.

*ತತ್ರಾಪಿ ಜನ್ಮಶತಕೋಟಿಷು ಮಾನುಷತ್ವಂ*
*ತತ್ರಾಪಿ ಜನ್ಮಶತಕೋಟಿಷು ಬ್ರಾಹ್ಮಣತ್ವಂ*
ಎಂದು ಶಾಸ್ತ್ರವು ಸಾರುತ್ತಿದೆ.
ಈ ಬ್ರಾಹ್ಮಣಜನ್ಮ ನಮಗೆ ಸಿಗಬೇಕಾದರೆ ಎಷ್ಟೆಷ್ಟು ಜನ್ಮಗಳಲ್ಲಿ ಧರ್ಮ ಮಾಡಿರಬೇಕು ಎಂಬುದು ಚಿಂತಿಸಿ.
ಇಂತಹಾ ಶ್ರೇಷ್ಠತಮ ಬ್ರಾಹ್ಮಣ ಕುಲದಲ್ಲಿ ಜನಿಸಿಯೂ ನಾವು ಕ್ಷುಲ್ಲಕ ಆಸೆಗಳಿಗಾಗಿ ಬ್ರಾಹ್ಮಣ್ಯದಿಂದ ದೂರಾಗುತ್ತಿರುವುದು ಬೇಸರದ ಸಂಗತಿ.
ನಾವು ವಜ್ರವನ್ನು ಗಾಜಿನ ಹರಳು ಎಂದು ತಿಳಿದಿದ್ದೇವೆ.
ಬ್ರಾಹ್ಮಣ ಜನ್ಮವನ್ನು ವ್ಯರ್ಥವಾಗಿ ಕಳೆಯುತ್ತಿದ್ದೇವೆ. *ದುಡ್ಡು ಕಾಸು ಹೊಟ್ಟೆ ಬಟ್ಟಗೆ ಕಮ್ಮಿಯಾದರೂ ಧರ್ಮಕ್ಕೆ ಕೊರತೆಯಾಗದೆ ಇವರುವವನೇ ನಿಜವಾಗಿ ಬ್ರಾಹ್ಮಣ.*

ಚಂದ್ರಗುಪ್ತನ ಮೌರ್ಯನ ಗುರುವೇ ಆಗಿದ್ದರೂ ಆಚಾರ್ಯ ಚಾಣಕ್ಯರು ಗುಡಿಸಲಿನಲ್ಲಿ ವಾಸಮಾಡುತ್ತಿದ್ದರು.
ರಾಷ್ಟ್ರದ ಅಭ್ಯುದಯಕ್ಕೆ ಜಾತಿಮತಪಂಥಗಳ ಬೇಧಭಾವ ಇಲ್ಲದೆ ಸರ್ವರ ಅಭ್ಯುದಯಕ್ಕೆ ದುಡಿದರು.
ಅಂತಹಾ ನಿಸ್ಪೃಹತೆ ಮತ್ತು ದಕ್ಷತೆ ನಮಗೆ ಇಲ್ಲವಾದರೂ ಕಡೆಯ ಪಕ್ಷ ಬ್ರಾಹಣ್ಯದಿಂದ ದೂರಾಗದಷ್ಟು ನಿಸ್ಪೃಹತೆಯನ್ನು ದಕ್ಷತೆಯನ್ನಾದರೂ ರೂಢಿಸಿಕೊಂಡು ಬದುಕನ್ನು ಪರಮಾರ್ಥದೆಡೆಗೆ ತಿರುಗಿಸಬೇಕು.
ಈಗಲೂ ಕಾಲ ಮಿಂಚಿಲ್ಲ ಇನ್ನಾದರೂ ಎಚ್ಚೆತ್ತುಕೊಳ್ಳಿ.

_*ಒಬ್ಬ ಬ್ರಾಹ್ಮಣ ಕನಿಷ್ಠ ಇಷ್ಟನ್ನಾದರೂ ರೂಢಿಸಿಕೊಳ್ಳಬೇಕು*_

ಸಂಧ್ಯಾವಂದನೆ,ಜಪಾನುಷ್ಠಾನಗಳು ಮತ್ತು
ದೇವತಾರ್ಚನೆ
(ವಿವಾಹಿತ ಸ್ತ್ರೀಯರಿಗೆ ಗುರುಮಂತ್ರ ಅನುಷ್ಠಾನ, ತುಳಸಿಪೂಜೆ ಇತ್ಯಾದಿ)
ಬ್ರಹ್ಮಯಜ್ಞ
ಅಗ್ನಿಕಾರ್ಯ/ವೈಶ್ವದೇವ
ಬಲಿಹರಣ
ಪಿತೃಕಾರ್ಯ
ಶುದ್ಧ ಏಕಾದಶಿ
ಮನೆಯಲ್ಲಿ ಜಾತಾಶೌಚ ಮೃತಾಶೌಚ
ರಜಸ್ವಲಾಶೌಚಗಳ ನಿಯಮ ಪಾಲನೆ
ಯಥಾಶಕ್ತಿ ವೇದ (ಸ್ವಶಾಖೆಯಿಂದ ಮೊದಲ್ಗೊಂಡು) ವೇದಾಂತ ಶಾಸ್ತ್ರಗ್ರಂಥಗಳ ಅಧ್ಯಯನ

(ಇದು ಕನಿಷ್ಠ)
ಇಷ್ಟು ಮಾಡಿದರೆ ಮಾತ್ರ ನಾನೊಬ್ಬ ಬ್ರಾಹ್ಮಣ ಎಂದು ಹೇಳಿಕೊಳ್ಳಲು ಯೋಗ್ಯತೆ ಬರುತ್ತದೆ.
ನನಗೆ ಗೊತ್ತು ..ಇದನ್ನು ನೋಡಿ ಹುಬ್ಬೇರಿಸುವವರೇ ಹೆಚ್ಚು. ಆದರೆ ನಾನು ಸುಖಾದುಃಖಕ್ಕಿಂತ ಹಿತವಾದ ವಾಸ್ತವವನ್ನೇ ಹೇಳಬೇಕು.
*ಇಷ್ಟಾದರೂ ಮಾಡಲೇಬೇಕು ಎಂಬ ಜ್ಞಾನವಾದರೂ ನಮಗೆ ಇರಬೇಕು* ಹಾಗಾಗಿ ಹೇಳಿದ್ದೇನೆ.
ಇವುಗಳನ್ನು ನಾವು ಇಂದೇ ಆರಂಭ ಮಾಡಬೇಕೆಂದಿಲ್ಲ .
ಇದರಲ್ಲಿ ನಮಗೆ ಯಾವುದೆಲ್ಲಾ ಸಾಧ್ಯವೋ ಯಥಾ ಶಕ್ತಿ ಕೇಳಿ ತಿಳಿದು ಕಲಿತು ಆನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾತ್ರ ನಿರಂತರ ಸಾಗಬೇಕು. ಅಂತಹವರೂ ಕೂಡ ಹೆಮ್ಮೆಯಿಂದ ತಾನು ಬ್ರಾಹ್ಮಣ ಎಂದು ತನ್ನನ್ನು ಕರೆದುಕೊಳ್ಳಬಹುದು.
ಬ್ರಾಹ್ಮಣತ್ವದ ಸಂಪಾದನೆ ಸಂಧ್ಯಾವಂದನೆಯಿಂದ ಆರಂಭವಾಗಲಿ.ಅದೇ ಎಲ್ಲದರ ಮೂಲ.
ನಂತರ ಉಳಿದದ್ದು ಮಾಡಲು ಶಕ್ತಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡಿ ಯಥಾ ಶಕ್ತಿ ಪ್ರಮಾಣಿಕವಾಗಿ ಕೈಲಾದ ಎಲ್ಲಾ ಕರ್ಮಗಳನ್ನು ನಿರ್ವಂಚನೆಯಿಂದ ಮಾಡೋಣ.

ಇಷ್ಟೆಲ್ಲಾ ಮಾಡಬೇಕೆ ಅಯ್ಯೋ ಎಂದು ಇದನ್ನು ಶಿಕ್ಷೆಯಂತೆ ಖಂಡಿತಾ ಭಾವಿಸದಿರಿ. ಸ್ವಧರ್ಮಾಚರಣೆ ಮಾತ್ರ ನಮ್ಮನ್ನು ಸಂಸಾರದಿಂದ ಪಾರು ಮಾಡಿ ಮೋಕ್ಷದ ಕಡೆಗೆ ನಡೆಸುವುದು.
ವಿಹಿತ ಕರ್ಮಗಳನ್ನು ಬಿಟ್ಟರೆ ಅನರ್ಥಗಳಿಗೆ ಗುರಿಯಾಗಿ ಕರ್ಮ ಸಂಚಯವು ನಮ್ಮನ್ನು ತಮಸ್ಸಿಗೆ ಈಡು ಮಾಡುವುದು ಎಂದು ಗೀತೆಯಲ್ಲಿ ಶ್ರೀಕೃಷ್ಣನು ಎಚ್ಚರ ನೀಡಿದ್ದಾನೆ.

ಇನ್ನಾದರೂ ಎಚ್ಚೆತ್ತುಕೊಳ್ಳಿ ನಮ್ಮ ಬುದ್ಧಿಯನ್ನು ಧರ್ಮಮಾರ್ಗದಲ್ಲಿ ಭಗವಂತನು ಪ್ರೇರಣೆ ಮಾಡಲಿ.

#ಧಿಯೋ_ಯೋ_ನಃ_ಪ್ರಚೋದಯಾತ್
#ಮರಳಿ_ಬ್ರಾಹ್ಮಣ್ಯದೆಡೆಗೆ

(ವಿಶೇಷ ಸೂಚನೆ: ಎಷ್ಟೋ ಮಂದಿ ಬ್ರಾಹ್ಮಣರು ವಿಹಿತಧರ್ಮವನ್ನು ಯಥಾಶಕ್ತಿ ಯಥಾಮತಿ ಆಚರಣೆ ಮಾಡುತ್ತಿದ್ದಾರೆ. ಅವರಿಗೆ ದೇವರು ಸಕಲಸೌಭಾಗ್ಯ ಕೊಟ್ಟು ಕಾಪಾಡಲಿ. ನನ್ನ ಈ ಲೇಖನ ಬ್ರಾಹ್ಮಣ್ಯದಿಂದ ದೂರವಾಗಿರುವ ಮತ್ತು ಬ್ರಾಹ್ಮಣ್ಯದೆಡೆಗೆ ಸಾಗಲಿಚ್ಚಿಸುವ ಸಜ್ಜನರಿಗೆ ಮಾತ್ರ. ಈ ಪೋಸ್ಟ್ ಯಾರನ್ನೂ ವೈಯಕ್ತಿಕವಾಗಿ ಉದ್ದೇಶಿಸಿಲ್ಲ. ಸಮಗ್ರ ಬ್ರಾಹ್ಮಣ ಸಮಾಜದ ಏಳಿಗೆಯ ದೃಷ್ಟಿಯಿಂದ ಹೇಳಿರುವುದು.ಯಾರಿಗಾದರೂ ಈ ಲೇಖನದಿಂದ ವೈಯಕ್ತಿಕವಾಗಿ ಬೇಸರವಾಗಿದ್ದರೆ ಕ್ಷಮಿಸಿ.)

#ಮರಳಿ_ಬ್ರಾಹ್ಮಣ್ಯದೆಡೆಗೆ

21/10/2021
09/09/2021

Delivery profile jobs opportunity available in Bangalore MHL Mahalakshmi layout and Yeshwanthpur location Bangalore.
Vaccination report is required.
We provide electric bike for delivering the product.
We pay 40₹ per order to get it delivered.
Every 10days once we pay you salary .
What's app to know more details. 💐

04/09/2021

Contact Person Mr. Kiran Rajashekar.
Contact Number : +919916473156
It's a delivery profile.for BIG BASKET.
Location: Bangalore.
Gender : Male and Female.
Electric bike is provided from our side .

26/08/2021

Professional trained personnel for the delivery of daily basic requirements of the public. You will be given a Electric bike on rental basis. Per order we pay you ₹ 40 /- . Per day we charge ₹ 120/- as a rental for the bike. From morning 6.00am to evening is the timings. Breakfast, lunch, and night food is provided by the company side on paying very marginal amount. T- shirt, trousers, I'd card will be provided. No ESI, PF, GRATUITY benefits. 1st dose of vaccination of Covid-19 is mandatory.
Contact Person : Mr. KIRAN RAJASHEKAR.
Contact Number : +919916473156

Address

Bangalore

Telephone

+919916473156

Website

Alerts

Be the first to know and let us send you an email when Delivery Jobs posts news and promotions. Your email address will not be used for any other purpose, and you can unsubscribe at any time.

Contact The Business

Send a message to Delivery Jobs:

Share

Category